ಎಲ್ಲರಿಗೂ ವಂದನೆಗಳು
ಅದೇ ರೀತಿ ಎಲ್ಲರಿಗೂ ತಡವಾಗಿ ಸಂಕ್ರಾಂತಿ ಹಬ್ಬದ ಶುಭಾಶಯಗಳು (ಕರ್ನಾಟಕ ಭಾರತ)
ಸಂಕ್ರಾಂತಿ ಹಬ್ಬವನ್ನು ನಮ್ಮ ದೇಶದಲ್ಲಿ (ಭಾರತ) ಆಯಾಯ ರಾಜ್ಯಗಳಿಗೆ ಅನುಗುಣವಾಗಿ ವಿಜೃಂಭಣೆಯಿಂದ ವೈಶಿಷ್ಟವಾಗಿ ಆಚರಣೆ ಮಾಡುತ್ತಾರೆ
(ಸಂಕ್ರಾಂತಿ ಹಬ್ಬದ ದಿನ ಸಂಜೆ ಹಸುಗಳನ್ನು ಬೆಂಕಿ ಆರಿಸುವುದು ಒಂದು ವಿಶಿಷ್ಟವಾದ ಸಂಪ್ರದಾಯ ಅದರ ಒಂದು ತುಣುಕು)
ಈ ಸಂಕ್ರಾಂತಿ ಹಬ್ಬವನ್ನು ಕರ್ನಾಟಕದಲ್ಲಿ ಸಂಕ್ರಾಂತಿ ತಮಿಳುನಾಡಿನಲ್ಲಿ ಪೊಂಗಲ್ ಅದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ
ಕೆಲವು ಕಡೆ ಗಾಳಿಪಟ ಹಾರಿಸುತ್ತಾರೆ ಕೆಲವು ಕಡೆ ಹಸುಗಳನ್ನು ಸಿಂಗಾರ ಮಾಡಿ ಅಲಂಕರಿಸುತ್ತಾರೆ ಕೆಲವು ಎಳ್ಳು ಬೆಲ್ಲ ಬೀರಿ ಎಲ್ಲರಿಗೂ ಸಂತೋಷದಿಂದ ಕೊಡುತ್ತಾರೆ ಕಡಲೆಕಾಯಿ ಕಬ್ಬು ಇವುಗಳನ್ನು ಸಹ ಸಂತೋಷದಿಂದ ಎಲ್ಲರಿಗೂ ಕೊಟ್ಟು ಹಂಚಿ ತಿನ್ನುತ್ತಾರೆ.
ಈ ರೀತಿ ಹಸು ಕುರಿ ಎತ್ತುಗಳನ್ನು ಸಾಕಿದ ಪ್ರತಿಯೊಬ್ಬರು ಸಹ ಕಾಪು ಕಟ್ಟಿದ ಬೆಂಕಿಯನ್ನು ದಾಟಿಸಿಕೊಂಡು ಬಂದರೆ ಹಸುಗಳ ಆರೋಗ್ಯದಲ್ಲಿ ಯಾವುದೇ ಏರುಪೇರಾಗುವುದಿಲ್ಲ ಎಂಬುದು ಪ್ರತಿತಿ.
ಬೆಂಕಿ ಹಾಯಿಸಿದ ನಂತರ ವೇಗವಾಗಿ ಎತ್ತುಗಳನ್ನು ಓಡಿಸಿಕೊಂಡು ಬೆಂಕಿಯಲ್ಲಿ ಹಾರಿಸುತ್ತಾರೆ ಬೆಂಕಿ ನಂದಿ ಹೋದ ನಂತರ ಬೂದಿಯ ಮೇಲೆ ಉಳಿದ ಹಸುಗಳು ವಯಸ್ಸಾದ ಹಸು ಎತ್ತುಗಳು ಕುರಿಗಳನ್ನು ದಾಟಿಸುತ್ತಾರೆ ಇದರಿಂದ ಹಸುಗಳಿಗೆ ಯಾವುದೇ ಅಪಾಯ ಇರುವುದಿಲ್ಲ.
2023ರ ಮೊದಲ ಹಬ್ಬ ಇದಾಗಿದೆ
ಅದೇ ರೀತಿ ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನ ಇದಾಗಿದೆ ಇದನ್ನು ಸುಗ್ಗಿ ಹಬ್ಬ ಎಂತಲೂ ಸಹ ಕರೆಯುತ್ತಾರೆ.
Update
ಸಂಕ್ರಾಂತಿ.ಸಂಸ್ಕೃತಿ
ಗೋಧೂಳಿ ಲಗ್ನದಲ್ಲಿ ಕಿಚ್ಚು ಹಾಯಿಸುವುದು ಹಸುಗಳು ಹಾಗೂ ಎತ್ತುಗಳನ್ನು ಸಿಂಗರಿಸಿ ಪೂಜಿಸುವುದು ಹಳ್ಳಿಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಇದಕ್ಕೆ ಒಂದು ಕಥೆಯೂ ಉಂಟು. ಒಮ್ಮೆ ಶಿವ ಬಸವನ ಕೈಯಲ್ಲಿ ಅವನ ಭಕುತರಿಗೆ “ದಿನಾ ಸ್ನಾನ, ಶಿವಧ್ಯಾನ, ಒಪ್ಪೊತ್ತಿನ ಊಟ, ಕೈಲಾಸಕ್ಕೆ ಮಾರ್ಗ” ಎಂದು ನಿರೂಪ ಕಳುಹಿದನಂತೆ. ಶಿವನ ಮುಂದೆ ಹೇಳುವೆನೆಂದು ಕೋಲೆ ಆಡಿಸಿದ ಬಸವ ಭುವಿಗೆ ಬಂದು ಶಿವ ಭಕುತರ ಬಳಿ ದಿನಾ ಸ್ನಾನ, ಮೂರು ಹೊತ್ತಿನ ಊಟ, ಶಿವಧ್ಯಾನ ಕೈಲಾಸಕ್ಕೆ ಮಾರ್ಗ ಎಂದು ಅರುಹಿದನಂತೆ. ಮೂರು ಹೊತ್ತಿನ ಊಟ-ಎಂದು ತಪ್ಪು ಅರುಹಿದೆಯಲ್ಲಾ, ಬೆಳೆ ಬೆಳೆದರೆ ತಾನೆ ಊಟ? ಹೋಗು ಮೂರು ಹೊತ್ತಿನ ಊಟಕ್ಕಾಗಿ ಬೆಳೆ ಬೆಳೆಯುವ ಮನುಜನಿಗೆ ಸಹಾಯಕನಾಗಿ ಜೀವಿಸು ಎಂದು ಬಸವನಿಗೆ ಆಣತಿ ಇತ್ತನಂತೆ. ಅಂದಿನಿಂದ ನೊಗಕ್ಕೆ ಬಂದಿಯಾದ ಹುಲ್ಲಿನ ಬಸವ ಹುಲು ಮಾನವನಿಗಾಗಿ ಶ್ರಮಿಸುತ್ತಿದ್ದಾನೆ.
ದನದ ಕೊಟ್ಟಿಗೆಗಳನು ಶುದ್ಧೀಕರಿಸಿ, ಜಾನುವಾರುಗಳ ಮೈ ತೊಳೆದು, ಕೊಂಬುಗಳಿಗೆ ಬಣ್ಣ, ರಿಬ್ಬನ್ನು, ಕೊರಳಿಗೆ ಗಂಟೆಸರ, ಹೂ ಹಾರ, ಗಬ್ಬವಾಗಿರುವ ಹಸುವಿಗೆ ಮೈಮೇಲೆ ಬಣ್ಣದ ವಸ್ತ್ರವನು ಹಾಕಿ ಆರತಿ ಮಾಡಿ, ಮೆರವಣಿಗೆ ಮಾಡಿಸುತ್ತಾರೆ. ಅನೇಕ ಕಡೆಗಳಲಿ ಕಿಚ್ಚು ಹಾಯಿಸುವುದು ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯಾಗಿದೆ. ಕಿಚ್ಚು ಹಾಯಿಸುವುದು ಹಸು-ಎತ್ತುಗಳ ದೃಷ್ಟಿನಿವಾರಣೆಗೆ ಎಂದರೂ ಮುಖ್ಯವಾಗಿ ಉರಿಯ ಸೋಂಕಿನಿಂದ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಹಾಗೂ ಅವುಗಳ ಮೈಗಳಲಿ ಅಂಟಿಕೊಂಡ ಸಣ್ಣ ಸಣ್ಣ ಕ್ರಿಮಿ ಕೀಟಗಳು ಬಿಸಿಯ ಶಾಖದಿಂದ ನಾಶವಾಗುವುದು ಎಂಬ ಕಾರಣವೂ ಉಂಟು.
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
special thanks to @TravellerG for guiding us.